ಸೌರ ಪಂಪ್ಸೆಟ್ಗಳಿಗೆ ಬಂಪರ್ ಸಹಾಯಧನ! ಸೌರ ಪಂಪ್ಸೆಟ್ಗೆ ಶೇ. 80% ಸಹಾಯಧನ!
ಕೃಷಿ ಕ್ಷೇತ್ರವು (Agricultural field) ನಮ್ಮ ದೇಶದ ಆರ್ಥಿಕ ಮತ್ತು ಸಾಮಾಜಿಕ ಜೀವನದ ಪ್ರಮುಖ ಅಂಶವಾಗಿದ್ದು, ರೈತರ ಅನುಕೂಲಕ್ಕಾಗಿ ಸರ್ಕಾರವು ವಿವಿಧ ಯೋಜನೆಗಳನ್ನು ಅನುಷ್ಟಾನಗೊಳಿಸುತ್ತಿದೆ. ಈ ಹಿನ್ನಲೆಯಲ್ಲಿ, ಕರ್ನಾಟಕ ಸರ್ಕಾರವು ರೈತರಿಗಾಗಿ ಮಹತ್ವದ ಘೋಷಣೆಯನ್ನು ಮಾಡಿದ್ದು, ಕೃಷಿ ಪಂಪ್ಸೆಟ್ಗಳಿಗೆ (Solar Pumpsets) ಆರ್ಥಿಕ ನೆರವು ನೀಡುವ ಮಹತ್ವದ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ನಮ್ಮ ದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ವಿದ್ಯುತ್ ಸರಬರಾಜು ಸದಾ ಚರ್ಚೆಗೆ ಒಳಗಾಗುವ ವಿಷಯವಾಗಿದ್ದು, ಅನೇಕ ರೈತರು ನಿರ್ವಹಣಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಗಂಭೀರವಾಗಿ ಯೋಚಿಸಿದ ಸರ್ಕಾರವು, ಸೌರಶಕ್ತಿಯ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ “ಕುಸುಮ್ ಬಿ” ಮತ್ತು “ಕುಸುಮ್ ಸಿ” ಯೋಜನೆ (Kusum B and Kusum C Schemes) ಗಳಡಿ ವಿಶೇಷ ಸಹಾಯಧನ ನೀಡಲು ಮುಂದಾಗಿದೆ. ಇದು ರೈತರ ಕೃಷಿ ಚಟುವಟಿಕೆಗಳಿಗೆ ಬೆಂಬಲ ನೀಡುವುದರ ಜೊತೆಗೆ ದೀರ್ಘಕಾಲಿಕವಾಗಿ ಪರಿಸರ ಸ್ನೇಹಿ ಕೃಷಿ ಅಭ್ಯಾಸಗಳನ್ನು ಉತ್ತೇಜಿಸುತ್ತದೆ.
ಈ ಯೋಜನೆಯ ಸಹಾಯಧನದ ವಿವರ ಹೀಗಿದೆ :
ನೂತನ “ಕುಸುಮ್ ಬಿ” ಯೋಜನೆಯಡಿ, 3 ಹೆಚ್ಪಿ ಸಾಮರ್ಥ್ಯದ ಸೌರ ಕೃಷಿ ಪಂಪ್ಸೆಟ್ಗಳಿಗೆ (Solar Agricultural pumpset) ಶೇ.50% ಸಹಾಯಧನ ನೀಡಲಾಗುತ್ತಿದೆ. ಇದರ ಅರ್ಥ, 3 ಹೆಚ್ಪಿ ಪಂಪ್ ಅಳವಡಿಸಲು ₹2 ಲಕ್ಷ ವೆಚ್ಚವಾದರೆ, ರೈತರು ₹1 ಲಕ್ಷ ಸಹಾಯಧನ ಪಡೆಯಲು ಅರ್ಹರಾಗುತ್ತಾರೆ. ಅದೇ ರೀತಿ, ಹೆಚ್ಚು ಸಾಮರ್ಥ್ಯದ ಪಂಪ್ಸೆಟ್ಗಳ ಖರ್ಚು ₹3 ಲಕ್ಷವಾಗಿದ್ದರೆ, ₹1.5 ಲಕ್ಷ ಸಹಾಯಧನ ಒದಗಿಸಲಾಗುತ್ತದೆ.
ಕುಸುಮ್-ಸಿ ಯೋಜನೆಯಡಿ, ರೈತರು ತಮ್ಮ ಖಾಸಗಿ ಅಥವಾ ಸರ್ಕಾರಿ ಭೂಮಿಯಲ್ಲಿ ಸೌರ ವಿದ್ಯುತ್ ಉತ್ಪಾದನೆ ಮಾಡಿ ಗ್ರಿಡ್ಗೆ (Grid) ಪೂರೈಸಬಹುದಾದ ಸೌಲಭ್ಯವನ್ನು ಪಡೆಯಬಹುದು. ಈ ಮೂಲಕ ರೈತರು ಸತತ ಆದಾಯವನ್ನು ಸಂಪಾದಿಸಬಹುದು ಮತ್ತು ನವೀನೀಕರಣ ಶಕ್ತಿಯ ಅಭಿವೃದ್ಧಿಗೆ ಸಹಕಾರಿಯಾಗುತ್ತದೆಗುತ್ತದೆ.
ಯಾವ ರೈತರು ಈ ಯೋಜನೆಗೆ ಅರ್ಜಿ ಹಾಕಬಹುದು?
ಸೌರ ಕೃಷಿ ಪಂಪ್ಸೆಟ್ಗಳ ಅನುಕೂಲ ಪಡೆಯಲು, ರೈತರು ಈ ಅರ್ಹತೆಯನ್ನು (Qualifications) ಪೂರೈಸಬೇಕು:
ಅರ್ಜಿದಾರರು ಭೂಮಿಯ ಮಾಲೀಕರು ಆಗಿರಬೇಕು.
ಆಧಾರ್ ಕಾರ್ಡ್, ಆರ್ಟಿಸಿ (ಭೂಮಿ ದಾಖಲೆ), ಮತ್ತು ಬ್ಯಾಂಕ್ ಖಾತೆ ವಿವರಗಳು ಅಗತ್ಯ.
ಪಂಪ್ಸೆಟ್ ಅಳವಡಿಸಲು ಅಗತ್ಯವಿರುವ ಭೂಮಿಯ ಸ್ಥಳ ಲಭ್ಯತೆ ಇರಬೇಕು.
ಅರ್ಜಿಯ ಪ್ರಕ್ರಿಯೆ (Apllication processes)
ಮತ್ತು ನೋಂದಣಿ ಹೇಗೆ ಮಾಡಬೇಕು?:
ಸೌಲಭ್ಯ ಪಡೆಯಲು ರೈತರು ತಕ್ಷಣವೇ ಆನ್ಲೈನ್ ಪೋರ್ಟಲ್ (https://souramitra.com) ಮೂಲಕ ನೋಂದಣಿ ಮಾಡಿಸಿಕೊಳ್ಳಬಹುದು.
ಮೇಲೆ ನೀಡಲಾಗಿರುವ ವೆಬ್ಸೈಟ್ ಗೆ ತೆರಳಬೇಕು.
ನಂತರ ಆಧಾರ್ ಸಂಖ್ಯೆ, ಭೂಮಿ ದಾಖಲೆ (RTC), ಬ್ಯಾಂಕ್ ವಿವರಗಳನ್ನು ಸಲ್ಲಿಸಿ
ಅರ್ಜಿಯನ್ನು ದೃಢೀಕರಿಸಿ
ಅನುಮೋದನೆಗೊಂಡ ಬಳಿಕ, ಸೌಲಭ್ಯ ಲಭ್ಯವಾಗುತ್ತದೆ
ರಾಜ್ಯ ಸರ್ಕಾರದ (state government) ಇಂಧನ ಸಚಿವರು ಈ ಬಗ್ಗೆ ಮಾತನಾಡಿ, “ರೈತರು ವಿದ್ಯುತ್ ಪಂಪ್ಸೆಟ್ಗಳ ಪರ್ಯಾಯವಾಗಿ ಸೋಲಾರ್ ಪಂಪ್ಸೆಟ್ ಅಳವಡಿಸಿಕೊಂಡರೆ, ಕೃಷಿಯಲ್ಲಿ ಉಳಿತಾಯ ಹೆಚ್ಚುವುದು ಹಾಗೂ ದೀರ್ಘಕಾಲಿಕ ಲಾಭದಾಯಕ ಆಯ್ಕೆ ಸಿಗುತ್ತದೆ. ಸರ್ಕಾರ (Government) ಈ ನಿಟ್ಟಿನಲ್ಲಿ ಶೇ. 80% ಸಹಾಯಧನ ಒದಗಿಸಲು ಬದ್ಧವಾಗಿದೆ.” ಎಂದು ತಿಳಿಸಿದ್ದಾರೆ.
ಸೌರ ಪಂಪ್ಸೆಟ್ ಯೋಜನೆಯಿಂದ ರೈತರಿಗೆ ಬಹುಮುಖ ಲಾಭ
▪️ ವಿದ್ಯುತ್ ಭಾರದಿಂದ ಮುಕ್ತಿ :
ಡೀಸೆಲ್ ಪಂಪ್ಸ್ ಅವಲಂಬನೆಯ ಅಗತ್ಯ ಇರುವುದಿಲ್ಲ.
▪️ ಉಳಿತಾಯದ ಕೃಷಿ :
ನಿರಂತರ ನೀರಿನ ಪೂರೈಕೆ, ಶೇ. 80% ಸಬ್ಸಿಡಿ.
▪️ ಅತಿರಿಕ್ತ ಆದಾಯ :
ಕುಸುಮ್-ಸಿ ಯೋಜನೆಯಡಿ, ರೈತರು ಸ್ವಂತವಾಗಿ ವಿದ್ಯುತ್ ಉತ್ಪಾದಿಸಿ ಮಾರಾಟ ಮಾಡಬಹುದು.
▪️ ಗಮನಿಸಿ (Notice) :
ಈ ಮಹತ್ವದ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ https://souramitra.com ಪೋರ್ಟಲ್ಗೆ ಭೇಟಿ ನೀಡಿ. ನಿಮ್ಮ ಭವಿಷ್ಯ ಇಂದು ನಿಮ್ಮ ಕೈಯಲ್ಲಿದೆ!
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.